ಶ್ರೀನಿವಾಸಪುರ:- ಆರ್ ಪಿ ಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಡಾಕ್ಟರ್ ಎಂ ವೆಂಕಟಸ್ವಾಮಿ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣಾ ಪ್ರಣಾಳಿಕೆ ಕರಪತ್ರವನ್ನು
ಶ್ರೀನಿವಾಸಪುರ ತಾಲೂಕಿನ ಯಲ್ದುರು ಹೋಬಳಿಯ ಮಲ್ಲಗಾನಹಳ್ಳಿ ಗ್ರಾಮದ ನಿವಾಸದಲ್ಲಿ ಡಾ. ಎಮ್ ವೆಂಕಟಸ್ವಾಮಿ ರವರು ಪತ್ರಿಕಾಗೋಷ್ಠಿಯನ್ನು ಕರೆದು ಕೋಲಾರ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು ಡಾ. ಎಮ್ ವೆಂಕಟಸ್ವಾಮಿ ರವರು ಜಿಲ್ಲೆಯ ಅಭಿವೃದ್ಧಿಗಾಗಿ 14 ಅಂಶಗಳ ಪ್ರಣಾಳಿಕೆ ಹೊಂದಿರುವ ಕರಪತ್ರವನ್ನು ಬಿಡುಗಡೆ ಮಾಡಿದರು.
ಈ ಕರಪತ್ರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕಿಗೂ ಕಾವೇರಿ ನೀರು ಪೂರೈಕೆ ಯೋಜನೆ ಜಾರಿ, ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ, ಕ್ಷೇತ್ರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಎಲ್ಲಾ ಕೆರೆಗಳಲ್ಲಿ ಹೂಳು ತಿಳಿಸಿ ಸಮಗ್ರ ಜಲ ಸಂವರ್ಧನೆ ಯೋಜನೆ, ಹೊಂಗೆ ಮತ್ತು ಹುಣಸೆ ಉತ್ಪನ್ನಗಳ ರಾಷ್ಟ್ರಮಟ್ಟದ ದೊಡ್ಡ ಉದ್ಯಮ ಸ್ಥಾಪನೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಉದ್ಯೋಗ ನೀಡಿಕೆಯ ಬೃಹತ್ ಉದ್ಯಮ ಸ್ಥಾಪನೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಐಟಿ ಕಾರಿಡಾರ್ ನಿರ್ಮಾಣ, ಶಾಶ್ವತ ನೀರಾವರಿ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಕೋಲಾರದ ಬೆಟ್ಟವನ್ನು ಅಂತರರಾಷ್ಟ್ರೀಯ ಟೂರಿಸ್ಟ್ ಕೇಂದ್ರವಾಗಿ ಅಭಿವೃದ್ಧಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಬೃಹತ್ ಸೋಲಾರ್ ಪವರ್ ಪಾರ್ಕ್ ಸ್ಥಾಪನೆ, ನೇಕಾರರ ಪುನರ್ ವಸತಿ ಯೋಜನೆ ಸ್ಥಾಪನೆ, ರೈತರು ಬೆಳೆಯುವ ಟೊಮೇಟೊ ಆಲೂಗಡ್ಡೆ ದ್ರಾಕ್ಷಿ ಮಾವು ಪಸಲು ಶೇಖರಣೆ ಮಾಡಲು ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪನೆ, ರೇಷ್ಮೆ ಬೆಳೆಗಾರರ ಬೃಹತ್ ಹೈಟೆಕ್ ಉದ್ಯಮ ಸ್ಥಾಪನೆ, ಈ ಎಲ್ಲಾ ಅಂಶಗಳು ಕರಪತ್ರದಲ್ಲಿ ಮುದ್ರಿಸಿ ಪ್ರಣಾಳಿಕೆಯಾಗಿ ಬಿಡುಗಡೆ ಮಾಡಿದರು.
ನಾನು 70 ವರ್ಷಗಳ ಹಿರಿಯ ದಲಿತ ನಾಯಕನಾಗಿ ಆರ್ಪಿಐ ಪಕ್ಷದಿಂದ ಬೆಂಬಲಿತನಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಯಾಗಲು ಕೋಲಾರ ಲೋಕಸಭಾ ಅಭ್ಯರ್ಥಿಯಾಗಲು ನನ್ನ ಅಭಿಮಾನಿಗಳು ಅನುಯಾಯಿಗಳು ಮತ್ತು ಸಮುದಾಯದ ಮುಖಂಡರ ಒತ್ತಾಯದ ಮೇರೆಗೆ ನಾನು ಕಣಕ್ಕಿಳಿದಿದ್ದೇನೆ ಎಲ್ಲರೂ ಪಕ್ಷಾತೀತವಾಗಿ ಜಾತ್ಯತೀತವಾಗಿ ರೈತರು ಬಡವರು ಎಲ್ಲರೂ ನನ್ನನ್ನು ಜಯಶೀಲರನ್ನಾಗಿ ಮಾಡುತ್ತೇವೆಂಬ ಭರವಸೆಯನ್ನು ನೀಡಿದ್ದಾರೆ. ಮತ ಎಣಿಕೆಯ ದಿನ ಈ ಕೋಲಾರ ಲೋಕಸಭಾ ಫಲಿತಾಂಶದಲ್ಲಿ ಅಚ್ಚರಿ ಮೋಡಿ ಬರಲಿದೆ ಎಂದು ಡಾಕ್ಟರ್ ಎಂ ವೆಂಕಟಸ್ವಾಮಿ ರವರು ಹೇಳಿದರಲ್ಲದೆ ಎಲ್ಲರೂ ಕ್ರಮ ಸಂಖ್ಯೆ 16 ಹೊಲಿಗೆ ಯಂತ್ರದ ಗುರುತಿಗೆ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆರ್ಪಿಐ ನ ರಾಜ್ಯ ಸಮಿತಿ ಸದಸ್ಯ ಎಂಡಿ ಅಂಬರೀಶ್, ಜಿಲ್ಲಾ ಗೌರವಾಧ್ಯಕ್ಷ ಎಂ ಪಾಪಣ್ಣ, ಜಿಲ್ಲಾ ಮುಖಂಡರಾದ ಛಲವಾದಿ ನಾಗರಾಜ್ ಸೇರಿದಂತೆ ಆರ್ಪಿ ಐ ಮುಖಂಡರು ಮುತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.