ಶ್ರೀನಿವಾಸಪುರ:- ತಾಲೂಕಿನ ಕಂಬಾಲಪಲ್ಲಿ ಗ್ರಾಮದ ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ರಾಮಕೋಟಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಅಭಯ ಆಂಜನೇಯಯಸ್ವಾಮಿ ಮೂಲ ದೇವರಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಪೂಜಾ ಕಾರ್ಯಕ್ರಮವನ್ನು ಕೆ.ಬಿ.ಚಲಪತಿ ಸ್ವಾಮಿ ನೆರವೇರಿಸಿದರು. ಧರ್ಮದರ್ಶಿಗಳಾದ ರೆಡ್ಡಮ್ಮ, ಬೀರಪ್ಪ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.
ಈ ಸಮಯದಲ್ಲಿ ಸೇವಾಕೃತರಾದ ರತ್ನಮ್ಮ, ರಾಮಕೃಷ್ಣಪ್ಪ, ಚೌಡಮ್ಮ, ರಂಗಮ್ಮ ಚಂದ್ರಮ್ಮ, ಶಿವಭಕ್ತಿ ಕವಿತ, ಆರಿಕುಂಟೆ ಶ್ರೀರಾಮಪ್ಪ, ನಾರಾಯಸ್ವಾಮಿ, ಶಾರದಮ್ಮ, ಮರಸನಪಲ್ಲಿ ಹಾಗು ಜಂಗಮಕೋಟೆಯ ಭಜನಾ ಮಂಡಲಿಯವರು ಪಾಲ್ಗುಂಡಿದ್ದರು.. ಇದೇ ಸಮಯದಲ್ಲಿ ಅರ್ಚಕ ಕೆ.ಬಿ.ಚಲಪತಿ ಸ್ವಾಮಿ ಮಾತನಾಡಿ ಅಭಯ ಆಂಜನೇಯಸ್ವಾಮಿ ದರ್ಶನ ಪ್ರಭಾವದಿಂದ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವಾಗುತ್ತದೆ , ಶತೃಪೀಡಿಯು ನಿವಾರಣವಾಗುತ್ತದೆ ಹಾಗು ಇನ್ನು ಅನೇಕ ರೀತಿಯಲ್ಲಿ ಜನಸಂಕಷ್ಟಗಳು ಪರಿಹಾರವಾಗುತ್ತದೆ ಎಂದು ಸ್ವಾಮಿ ಮಹಿಮೆಗಳ ಬಗ್ಗೆ ವಿವರಿಸಿದರು.