ಶ್ರೀನಿವಾಸಪುರ:- ಬರಪೀಡಿತ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಜನಸಾಮಾನ್ಯರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ನಿರ್ವಹಣೆ ಕುರಿತು ಕೋಲಾರ ಉಪ ವಿಭಾಗಾಧಿಕಾರಿಗಳಾದ ವೆಂಕಟರತ್ನರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು. ಶ್ರೀನಿವಾಸಪುರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬರಪೀಡಿತ ತಾಲೂಕದ ಶ್ರೀನಿವಾಸಪುರದ ವ್ಯಾಪ್ತಿಯಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಬೇಕಾದಂತಹ ಅವಶ್ಯಕತೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜೊತೆಯಲ್ಲಿ ತಹಸೀಲ್ದಾರ್ ಸುಧೀಂದ್ರ ರವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಶ್ರೀನಿವಾಸಪುರ ಪಟ್ಟಣದ 23 ವಾರ್ಡ್ ಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಜನರಿಗೆ ಅಭಾವ ಅವಾಗದಂತೆ 124 ಕೊಳವೆ ಬಾವಿಗಳಿದ್ದು ಇವುಗಳಲ್ಲಿ 96 ಕೊಳವೆ ಬಾವಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ನೀರಿನ ಅಭಾವ ಸರಿದೂಗಿಸುವ ನಿಟ್ಟಿನಲ್ಲಿ 10 ಕೊಳವೆ ಬಾವಿಗಳನ್ನು ರೀಡ್ರಿಲ್ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದು ಈ ಹತ್ತು ಕೊಳವೆಬಾವಿಗಳಲ್ಲಿ ಜನರಿಗೆ ನೀರು ಪೂರೈಕೆ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕ್ರಮಗಳನ್ನು ಕೈಗೊಂಡು ಮಾಹಿತಿ ನೀಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಹಳ್ಳಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರನ್ನು ಸರಬರಾಜು ಮಾಡಲು ಮತ್ತು ಜಾನುವಾರುಗಳಿಗೆ ನೀರನ್ನು ಉಣಿಸಲು ಹಾಲಿ ಇರುವ 535 ಕೊಳವೆ ಬಾವಿಗಳು ಇದ್ದು ಇವುಗಳಲ್ಲಿ 479 ಕೊಳವೆ ಬಾವಿಗಳು ನಿರಂತರವಾಗ ನೀರನ್ನು ಹಾಯಿಸಲು ವಾಟರ್ ಮ್ಯಾನ್ ಗಳು ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಇನ್ನೂ ಹೆಚ್ಚಿನ ನೀರನ್ನು ಓದಿಸಲು 56 ಕೊಳವೆಬಾವಿಗಳನ್ನು ರೀ ಡ್ರಿಲ್ ಮಾಡಿಸಿ ಸಂಬಂಧಪಟ್ಟ ವಿದ್ಯುತ್ ಪೂರೈಕೆ ಎಲ್ಲಾ ರೀತಿಯ ಉಪಕರಣಗಳನ್ನು ಕೊಡಿಸಲು ಅಧಿಕಾರಿಗಳಿಗೆ ಸೂಚಿಸಿ ಗ್ರಾಮೀಣ ಭಾಗದಲ್ಲಿ ನೀರು ಪೂರೈಕೆಯನ್ನು ಒದಗಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ತಾಲೂಕಿನಾದ್ಯಂತ ಒಟ್ಟು ದನ ಕರುಗಳು 36763 ಇದ್ದು ಕುರಿ ಮೇಕೆಗಳು 140553 ಇದ್ದು ಪ್ರತಿ ಒಂದು ಜಾನುವಾರುಗೆ 6 ಕೆ.ಜಿ ಒಂದು ದಿನಕ್ಕೆ ಮೇವು ಸಾಕಾಗುತ್ತದೆ ಹಾಗೂ ಒಂದು ಕುರಿ ಅಥವಾ ಮೇಕೆಗೆ ಅರ್ಥ ಕೆ.ಜಿ ಮೇವು ಬೇಕಾಗುತ್ತದೆ. ಅದರಂತೆ ತಾಲೂಕಿನಲ್ಲಿ ಇರುವ ಜಾನುವಾರುಗಳಿಗೆ ಒಂದು ವಾರಕ್ಕೆ 2036 ಟನ್ ಮೇವು ಬೇಕಾಗುತ್ತದೆ ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ವತಿಯಿಂದ ಜಾನುವಾರುಗಳಿಗೆ ಬೇಕಾದಂತಹ ಅಗತ್ಯ ಒಣಮೆವು ದಾಸ್ತಾನು ಈಗ 31155 ನಮ್ಮ ಹತ್ತಿರ ಮೇವು ಇದೆ ಇನ್ನುಮುಂದೆ 15 ವಾರಗಳಿಗೆ ಜಾನುವಾರುಗಳಿಗೆ ಆಗುವಷ್ಟು ಮೇವು ನಮ್ಮಲ್ಲಿ ದಾಸ್ತಾನು ಇದೆ. ಅದರಂತೆ ನಮಗೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಅಗತ್ಯತೆ ನೋಡಿಕೊಂಡು ಅವಶ್ಯಕತೆ ಬಿದ್ದಾಗ ಜಾನುವಾರುಗಳಿಗೆ ಮೇವಿನ ದಾಸ್ತಾನು ಶೇಖರಣೆ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಸಭೆಯನ್ನು ಕರೆದು ಜನರಿಗೆ ಹಾಗೂ ಜನವರಿಗಳಿಗೆ ಬೇಕಾದಂತಹ ನೀರು ಹಾಗೂ ಮೇವನ್ನು ಹೊಂದಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಹಸೀಲ್ದಾರ್ ಸುಧೀಂದ್ರರವರು ತಿಳಿಸಿದರು.ಈ ಸಂದರ್ಭದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.