ಕೋಲಾರ, ಮೇ ೪ರ ವರೆಗೆ ರಾಜ್ಯದಾದ್ಯಂತ ಒಣ ಹವೆ ಇರುವುದು ಹಾಗೂ ಕೋಲಾರದಲ್ಲಿಯೂ ಸಹ ಈ ಐದು ದಿನಗಳು ಒಣಹವೆ ಹಾಗೂ ಶಾಖದ ಅಲೆಗಳು ವಿಪರೀತವಿದ್ದು, ಸಾರ್ವಜನಿಕರು ಈ ಹವಾಮಾನಕ್ಕೆ ತಕ್ಕಂತೆ ಉಡುಪು, ಊಟ, ನೀರು ಮತ್ತು ಇನ್ನಿತರೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರು ತಿಳಿಸಿದ್ದಾರೆ. ಬೆಂಗಳೂರು ಹವಾಮಾನ ಹಾಗೂ ವಿಜ್ಞಾನ ಕೇಂದ್ರ ಇಲಾಖೆಯು ರಾಜ್ಯಾದ್ಯಂತ ಹವಾಮಾನ ಪರಿಸ್ಥಿತಿ ಕುರಿತು ಸಾರ್ವಜನಿಕರಿಗೆ ಶಾಖದ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡುತ್ತಿದೆ. ಆಗ್ನೇಯ ಮಧ್ಯಪ್ರದೇಶದಿಂದ ದಕ್ಷಿಣ ಒಳಗಿನ ಕರ್ನಾಟಕದವರೆಗೆ ವಿದರ್ಭ, ಮರಾಠವಾಡ ಮತ್ತು ಉತ್ತರ ಆಂತರಿಕ ಕರ್ನಾಟಕದಾದ್ಯಂತ ೧.೫ ಕಿ.ಮೀ. ಸಮುದ್ರ ಮಟ್ಟದಿಂದ ೧.೫ ಕಿ.ಮೀ. ವರೆಗೆ ವ್ಯಾಪಿಸಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿರುತ್ತದೆ. ಈ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ ಮುಂದಿನ ೫ ದಿನಗಳ ಹವಾಮಾನ ಮುನ್ಸೂಚನೆ ಸಹ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.