ಶ್ರೀನಿವಾಸಪುರ : ಕೆ ಸಿ ವ್ಯಾಲಿ ನೀರನ್ನು ಕೊಳಚೆ ನೀರು ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಯಲ್ಬದು ಹೋಬಳಿ ಮಟ್ಟದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾಜಿ ವಿಧಾನಸಭಾ ಅಧ್ಯಕ್ಷ ಕೆ ಆರ್ ರಮೇಶ್ ಕುಮಾರ್ ಮಾತನಾಡಿ ನಾನು ನಿಮ್ಮಗೆ ಮಾಡಿದ ಅನ್ಯಾಯವಾದರೂ ಏನು ನನ್ನನ್ನು ಸೋಲಿಸಿ ಎಂದು ಕರೆಕೊಟ್ಟು ಮಹಿಳೆಯರಿಗೆ ಒಂದೇ ರಾತ್ರಿಯಲ್ಲಿ ಮರಳು ಮಾಡುವಂತಹ ಮಾತುಗಳ ನಾಡಿ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದ ಕುಮಾರಸ್ವಾಮಿ ಶ್ರೀನಿವಾಸಪುರ ತಾಲೂಕಿನ ಮಹಿಳೆಯರಿಗೆ ನ್ಯಾಯ ಮಾಡಿದ್ದಾರೆಯೇ ಕಾಂಗ್ರೆಸ್ ಸರ್ಕಾರ ಮಹಿಳಾ ಮಣಿಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ನೀಡಿದ್ದು ಪ್ರಯಾಣ ಮಾಡುವಂತಹ ಮಹಿಳೆಯರನ್ನು ಆದಿ ತಪ್ಪಿದ್ದಾರೆ ಎಂದು ಹೇಳುವ ಮಾನ್ಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಿಳೆಯರಿಗೆ ನೀಡುವ ಗೌರವವಾದರೂ ಏನು ಎಂದು ರಮೇಶ್ ಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಮಹಿಳೆಯರು ಉಚಿತ ಪ್ರಯಾಣದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ ಹಾಗೂ ಆಸ್ಪತ್ರೆಗಳಿಗೆ ಮತ್ತು ಕೆಲಸ ಕಾರ್ಯಗಳಿಗೆ ಹೋಗುವ ಮಹಿಳೆಯರಿಗೆ ಅನುಕೂಲ ವಾಗಿರುವುದು ಸತ್ಯವಾಗಿದೆ
ಉಚಿತ ಸಾರಿಗೆ ವ್ಯವಸ್ಥೆ ಕಾಂಗ್ರೆಸ್ ಸರ್ಕಾರ ಮಾಡಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಸಹಕಾರ ನೀಡುವಂತೆ ಲೋಕಸಭಾ ಅಭ್ಯರ್ಥಿ ಕೆ ವಿ ಗೌತಮ್ ರವರಿಗೆ ಮತನೀಡಿ ಇಂದಿರಾ ಗಾಂಧಿನವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಮಹಿಳೆಯರಿಗೆ ಕೆ ಆರ್ ರಮೇಶ್ ಕುಮಾರ್ ರವರು ಕರೆ ನೀಡಿದರು.
ನನ್ನ ಬಳಿ ಕ್ಯಾಶ್ ಇಲ್ಲ ಕ್ಯಾಸ್ಟ್ ಇಲ್ಲ ಹೀಗಾಗಿ ಹಿಂದಿನ ಚುನಾವಣೆಯಲ್ಲಿ ನನ್ನನ್ನು ಅಡ್ಡಗಲ್ ನ ಮಾವಿನ ತೋಟದಲ್ಲಿ ಇರುವಂತೆ ಕುರಿ ಕಾಯುವಂತೆ ನೀವು ಮಾಡಿದ್ದೀರಾ ಇದಕ್ಕೆಲ್ಲ ಕಾರಣವೇನೆಂದರೆ ಚುನಾವಣೆ ಇಂದಿನ ರಾತ್ರಿ ಕ್ಯಾಶ್ ಹಂಚಿ ಮರಳುಗೂಡಿಸಿದ ನಾಯಕರ ಮಾತುಗಳನ್ನು ನನಗೆ ಮೋಸ ಮಾಡಿದ್ದೀರ ಎಂದು ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದರಲ್ಲದೆ ನನ್ನ ಬಳಿ ಕ್ಯಾಸ್ಟ್ ಇಲ್ಲ ಎಂಬ ಉದಾಹರಣೆಗೆ ನನ್ನ ಕುಲಬಾಂಧವರು ಕೇವಲ ದೇವಾಲಯಗಳಲ್ಲಿ ಗಂಟೆ ಬಾರಿಸಿಕೊಂಡಿರುವವರು ಬೆರಳಣಿಕೆ ಎಷ್ಟು ಮಾತ್ರ ಆದರೆ ಇಡೀ ವಿಧಾನಸಭಾ ಕ್ಷೇತ್ರದ ಜನರು ನನ್ನ ಕುಟುಂಬದ ಸದಸ್ಯರು ನನ್ನವರು ನನ್ನ ಕುಲದವರು ಎಂದು ಭಾವಿಸಿಕೊಂಡಿದ್ದೆ ಆದರೆ ಒಂದು ಜನಾಂಗದ ವ್ಯಕ್ತಿಗಳು ತನ್ನ ಕುಲದ ನಾಯಕನನ್ನು ಗೆಲುವಿನತ್ತ ಕೊಂಡೊಯ್ಯಲು ಒಂದೇ ರಾತ್ರಿಯಲ್ಲಿ ಒಗ್ಗಟ್ಟಾಗಿ ಕ್ಯಾಸ್ಟ್ ಎಂಬ ಅಮಲಿನಲ್ಲಿ ತೇಲಿ ನನ್ನ ಜೊತೆಯಲ್ಲಿದ್ದವರೇ ನನಗೆ ದ್ರೋಹ ಮಾಡಿದ್ದಾರೆ ಎಂದು ನೆರೆದಿದ್ದ ಸಭಿಕರಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ವ್ಯಕ್ತಪಡಿಸಿ ನನ್ನನ್ನು ಅಜ್ಞಾತವಾಸಕ್ಕೆ ತಳ್ಳಿದ್ದೀರಾ ಎಂದು ಜನತೆಯ ಮೇಲೆ ಕಿಡಿ ಕಾರಿದರು.
ನಾನು ನಿಮಗೆ ಮಾಡಿದ ತಪ್ಪಾದರೂ ಏನು ನಾನು ನಿಮ್ಮ ಕಷ್ಟಗಳಿಗೆ ಸ್ಪಂದಿಸಲಿಲ್ಲವೇ ಶ್ರೀನಿವಾಸಪುರ ತಾಲೂಕಿನಲ್ಲಿ ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಲು ಬಯಸಿದ್ದು ನನ್ನ ತಪ್ಪೇ ಕೆ ಸಿ ವ್ಯಾಲಿ ನೀರನ್ನು ತಂದು ವಿಧಾನಸಭೆಯಲ್ಲಿ ಎಲ್ಲರ ಗಮನ ಸೆಳೆದು ಸರ್ಕಾರದಿಂದ ಬೆಂಗಳೂರಿನಲ್ಲಿ ಹರಿಯುವ ಕೆಸಿ ವ್ಯಾಲಿ ನೀರನ್ನು ಈ ಬರಡು ಕೋಲಾರ ಜಿಲ್ಲೆಗೆ ಸೇರಿದಂತೆ ಶ್ರೀನಿವಾಸಪುರ ತಾಲೂಕಿನ ಎಲ್ಲಾ ಕರೆಗಳಿಗೂ ನಾನು ತುಂಬಲು ಹರಸಹಾಸ ಪಟ್ಟೆ ನನ್ನ ಅಧಿಕಾರ ಅವಧಿಯಲ್ಲಿ ಮುದುವಾಡಿ ಕೆರೆಯವರಿಗೂ ನೀರನ್ನು ತಂದು ಹರಿಸಿದೆ ಆದರೆ ಈ ತಾಲೂಕಿನ ಹಾಲಿ ಶಾಸಕರು ಶ್ರೀನಿವಾಸಪುರ ತಾಲೂಕಿಗೆ ನೀಡಿದ ಕೊಡುಗೆಯಾದರೂ ಏನು ಬತ್ತಿದ ಕೆರೆಗಳ ಕೊಡುಗೆಯೇ ಕುಮಾರಸ್ವಾಮಿ ರವರ ಅನುಕಂಪವೇ ನನ್ನ ಮೇಲಿನ ದ್ವೇಷವೇ ನನ್ನನ್ನು ಮೂಲೆಗುಂಪು ಮಾಡಿ ಇಂದು ಶ್ರೀನಿವಾಸಪುರ ತಾಲೂಕಿನ ಕೆರೆಗಳಲ್ಲ ಬತ್ತಿರುವುದು ನೀವು ಆಯ್ದುಕೊಂಡ ಜನನಾಯಕನ ಕೊಡುಗೆಯೇ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆಆರ್ ರಮೇಶ್ ಕುಮಾರ್ ತಮ್ಮದೇ ದಾಟಿಯಲ್ಲಿ ಜನರ ಗಮನ ಸೆಳೆಯುವಂತೆ ತಮ್ಮದೇ ಶೈಲಿಯಲ್ಲಿ ಜನತೆಯನ್ನು ಉರಿದುಂಬಿಸಿದರು.
ನನ್ನ ತಲೆಯ ಮೇಲೆ ಬಂಡೆ ಹಾಕಿದಂತೆ ಕೋಲಾರ ಲೋಕಸಭಾ ಅಭ್ಯರ್ಥಿ ಕೆ ವಿ ಗೌತಮ್ ರವರ ತಲೆಯ ಮೇಲೆ ಬಂಡೆ ಹಾಕಬೇಡಿ ನನ್ನ ಹಾಗೆಯೇ ಕೆ ವಿ ಗೌತಮ್ ರವರನ್ನು ಮೂಲೆಗುಂಪು ಮಾಡಬೇಡಿ ನೀವು ಪಡೆಯುತ್ತಿರುವ ಪಂಚ ಯೋಜನೆಗಳು ಗ್ಯಾರೆಂಟಿಗಳ ಫಲಾನುಭವಿಗಳಾಗಿದ್ದರೆ ನೀವು ಇಂದಿರಾಗಾಂಧಿರವರ ಅಭಿಮಾನಿಗಳಾಗಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷಕ್ಕೆ 26ರಂದು ನಡೆಯುವ ಮತದಾನದ ವೇಳೆ ಹಸ್ತದ ಗುರುತಿಗೆ ಮತ ನೀಡಿ ಎಂದು ಕೆಆರ್ ರಮೇಶ್ ಕುಮಾರ್ ರವರು ಕರೆ ನೀಡಿದರು.
ಈ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಮ್ಮ, ದಿಂಬಾಲ ಅಶೋಕ್, ಕೆಕೆ ಮಂಜುನಾಥ್, ಜಮೀರ್ ಅಹಮದ್, ವಕೀಲ ಮುನಿರಾಜು, ಕೃಷ್ಣ, ಮುಕ್ತಿಯರ್, ಎಂಡಿ ಅಪ್ಸರ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದರು.